ಸಾಧಕರನ್ನು ಸನ್ಮಾನಿಸುವುದು ಸಭ್ಯ ಸಮಾಜದ ಕರ್ತವ್ಯ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಏಪ್ರಿಲ್ 25 , 2015
|
ಎಪ್ರಿಲ್ 25, 2015
|
ಸಾಧಕರನ್ನು ಸನ್ಮಾನಿಸುವುದು ಸಭ್ಯ ಸಮಾಜದ ಕರ್ತವ್ಯ
ಹಾಲಾಡಿ :
ಸಮಾಜದಲ್ಲಿ ಆದ್ಯರನ್ನು ಆದರಿಸುವುದು,ಸಜ್ಜನರನ್ನು ಸತ್ಕರಿಸುವುದು ಸಾಧಕರನ್ನು ಸನ್ಮಾನಿಸುವುದು ನಾಗರಿಕ ಸಮಾಜದ ಕರ್ತವ್ಯ. ಇದು ಭಾರತೀಯ ಸ೦ಸ್ಕೃತಿಯ ಒಂದು ಅಂಗ, ಸುಮಾರು 35 ವರ್ಷ ಮಾರಣಕಟ್ಟೆ ಒಂದೇ ಮೇಳದಲ್ಲಿ ತಿರುಗಾಟ ನಡೆಸಿದ ಐರಬೈಲು ಆನಂದ ಶೆಟ್ಟರ ಸೇವೆ ಗಮನಾರ್ಹ. ಅಂತಹ ಅಪರೂಪದ ಸಾಧಕರನ್ನು ಸನ್ಮಾನಿಸಿದ ದಾಂಡೇಲಿಯ ಉದ್ಯಮಿ ಪ್ರಕಾಶ ಶೆಟ್ಟರ ಕಾರ್ಯ ಇತರರಿಗೆ ಅನುಕರಣೀಯ.
ಸಮಾಜದಲ್ಲಿ ಎಲ್ಲರಿಗೂ, ಪರರಿಗೆ ಉಪಕಾರ ಮಾಡುವ ಯೋಗ ಸಿಗುವುದಿಲ್ಲ. ಆದರೆ ಇನ್ನೊಬ್ಬರಿಗೆ ಅಪಕಾರ ಮಾಡದೇ ಇರಲು ಎಲ್ಲರಿಗೂ ಸಾದ್ಯ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಮಣಿಪಾಲದ ಪ್ರೊ.ಎಸ್.ವಿ.ಉದಯಕುಮಾರ ಶೆಟ್ಟಿಯವರು ಹೇಳಿದರು. ಅವರು ಹಾಲಾಡಿ ಸಮೀಪದ ಕಕ್ಕುಂಜೆಯಲ್ಲಿ ನಡೆದ ಮಾರಣಕಟ್ಟೆ ಮೇಳದ ವೇದಿಕೆಯಲ್ಲಿ ಹಿರಿಯ ಕಲಾವಿದ ಐರಬೈಲು ಆನಂದ ಶೆಟ್ಟರನ್ನು ಸನ್ಮಾನಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಕೆ.ಎಂ.ಎಫ಼್.ನಿರ್ದೇಶಕ ಹೆದ್ದೂರು ರಾಜೀವ ಶೆಟ್ಟಿ ಕಕ್ಕುಂಜೆ, ಸುರೇಶ ಶೆಟ್ಟಿ, ಭಾಗವತ ರಾಘವೇಂದ್ರ ಮಯ್ಯ ಭಾಗವಹಿಸಿದ್ದರು. ಸನ್ಮಾನ ಸ್ವೀಕರಿಸ ಆನಂದ ಶೆಟ್ಟಿಯವರು ಕೃತಜ್ಞತೆ ಸಲ್ಲಿಸಿದರು. ಕಕ್ಕುಂಜೆ ಗೈನಾಡಿಮನೆ ಉದ್ಯಮಿ ದಾಂಡೇಲಿ ಪ್ರಕಾಶ ಶೆಟ್ಟಿ ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದರು. ಯಕ್ಷಗಾನ ಭಗವತ ಸುರೇಶ ಶೆಟ್ಟಿ ಸ್ವಾಗತಿಸಿದರು. ಅಧ್ಯಾಪಕ ಕೃಷ್ಣ ಕೆ, ಕಾರ್ಯಕ್ರಮ ನಿರ್ವಹಿಸಿದರು. ಭಾಗವತ ಉಮೇಶ ಸುವರ್ಣ ವಂದಿಸಿದರು.
|
|
|