ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಸಾಧಕರನ್ನು ಸನ್ಮಾನಿಸುವುದು ಸಭ್ಯ ಸಮಾಜದ ಕರ್ತವ್ಯ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಏಪ್ರಿಲ್ 25 , 2015
ಎಪ್ರಿಲ್ 25, 2015

ಸಾಧಕರನ್ನು ಸನ್ಮಾನಿಸುವುದು ಸಭ್ಯ ಸಮಾಜದ ಕರ್ತವ್ಯ

ಹಾಲಾಡಿ : ಸಮಾಜದಲ್ಲಿ ಆದ್ಯರನ್ನು ಆದರಿಸುವುದು,ಸಜ್ಜನರನ್ನು ಸತ್ಕರಿಸುವುದು ಸಾಧಕರನ್ನು ಸನ್ಮಾನಿಸುವುದು ನಾಗರಿಕ ಸಮಾಜದ ಕರ್ತವ್ಯ. ಇದು ಭಾರತೀಯ ಸ೦ಸ್ಕೃತಿಯ ಒಂದು ಅಂಗ, ಸುಮಾರು 35 ವರ್ಷ ಮಾರಣಕಟ್ಟೆ ಒಂದೇ ಮೇಳದಲ್ಲಿ ತಿರುಗಾಟ ನಡೆಸಿದ ಐರಬೈಲು ಆನಂದ ಶೆಟ್ಟರ ಸೇವೆ ಗಮನಾರ್ಹ. ಅಂತಹ ಅಪರೂಪದ ಸಾಧಕರನ್ನು ಸನ್ಮಾನಿಸಿದ ದಾಂಡೇಲಿಯ ಉದ್ಯಮಿ ಪ್ರಕಾಶ ಶೆಟ್ಟರ ಕಾರ್ಯ ಇತರರಿಗೆ ಅನುಕರಣೀಯ.

ಸಮಾಜದಲ್ಲಿ ಎಲ್ಲರಿಗೂ, ಪರರಿಗೆ ಉಪಕಾರ ಮಾಡುವ ಯೋಗ ಸಿಗುವುದಿಲ್ಲ. ಆದರೆ ಇನ್ನೊಬ್ಬರಿಗೆ ಅಪಕಾರ ಮಾಡದೇ ಇರಲು ಎಲ್ಲರಿಗೂ ಸಾದ್ಯ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಮಣಿಪಾಲದ ಪ್ರೊ.ಎಸ್.ವಿ.ಉದಯಕುಮಾರ ಶೆಟ್ಟಿಯವರು ಹೇಳಿದರು. ಅವರು ಹಾಲಾಡಿ ಸಮೀಪದ ಕಕ್ಕುಂಜೆಯಲ್ಲಿ ನಡೆದ ಮಾರಣಕಟ್ಟೆ ಮೇಳದ ವೇದಿಕೆಯಲ್ಲಿ ಹಿರಿಯ ಕಲಾವಿದ ಐರಬೈಲು ಆನಂದ ಶೆಟ್ಟರನ್ನು ಸನ್ಮಾನಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಕೆ.ಎಂ.ಎಫ಼್.ನಿರ್ದೇಶಕ ಹೆದ್ದೂರು ರಾಜೀವ ಶೆಟ್ಟಿ ಕಕ್ಕುಂಜೆ, ಸುರೇಶ ಶೆಟ್ಟಿ, ಭಾಗವತ ರಾಘವೇಂದ್ರ ಮಯ್ಯ ಭಾಗವಹಿಸಿದ್ದರು. ಸನ್ಮಾನ ಸ್ವೀಕರಿಸ ಆನಂದ ಶೆಟ್ಟಿಯವರು ಕೃತಜ್ಞತೆ ಸಲ್ಲಿಸಿದರು. ಕಕ್ಕುಂಜೆ ಗೈನಾಡಿಮನೆ ಉದ್ಯಮಿ ದಾಂಡೇಲಿ ಪ್ರಕಾಶ ಶೆಟ್ಟಿ ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದರು. ಯಕ್ಷಗಾನ ಭಗವತ ಸುರೇಶ ಶೆಟ್ಟಿ ಸ್ವಾಗತಿಸಿದರು. ಅಧ್ಯಾಪಕ ಕೃಷ್ಣ ಕೆ, ಕಾರ್ಯಕ್ರಮ ನಿರ್ವಹಿಸಿದರು. ಭಾಗವತ ಉಮೇಶ ಸುವರ್ಣ ವಂದಿಸಿದರು.






Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ